Monday, June 28, 2010

ಹೀಗೊಂದಿಷ್ಟು ಜೋಕ್

ಹುಡುಗಿಯೊಬ್ಬಳು ಜೂಲು ನಾಯಿಯನ್ನು ಕರೆದುಕೊಂಡು ಹೋಗುತ್ತಿದ್ದಳು. ಇವಳನ್ನು ಒಲಿಸಿಕೊಳ್ಳಬೇಕೆಂದು ಯುವಕನೊಬ್ಬ

ಯುವಕ : ಮೇಡಂ ನಾಯಿ ಸಕತ್ತಾಗಿದೆ

ಮೇಡಂ : ಓಹ್ ಥ್ಯಾಂಕ್ಸ್

ಯುವಕ : ನಾಯಿಯನ್ನು ಒಮ್ಮೆ ಮುದ್ದಾಡಲಾ

ಮೇಡಂ : ಓಹ್, ಖಂಡಿತವಾಗಿ

ಯುವಕ : ( ಮುದ್ದಾಡುತ್ತಾ ) ನಾಯಿ ನೀನು ಎಷ್ಟು ಚೆನ್ನಾಗಿದ್ದೀಯಾ. ನಿನ್ನ ಮುಖಕ್ಕೊಂದು ನನ್ನ ಮುತ್ತು.

ಮೇಡಂ : ಸರ್, ಅದರ ಮುಖ ಈ ಕಡೆ ಇದೆ.



ಹೆಂಡತಿ : ರೀ ನಿಮ್ಮ ಮೊಬೈಲ್ ಕದ್ಕೊಂಡು ಹೋಗ್ತಾ ಇದಾನೆ ಹಿಡೀರಿ.

ಗಂಡ : ಎಲ್ಲೇ ಹೋಗ್ತಾನೆ. ಬ್ಯಾಟರಿ ಖಾಲಿಯಾದ ಮೇಲೆ ನಮ್ಮ ಮನೆಗೆ ಬರಬೇಕು.

ಹೆಂಡತಿ : ಯಾಕೆ

ಗಂಡ : ಚಾರ್ಜರ್ ನಮ್ಮ ಮನೆಲೇ ಅಲ್ವಾ ಇರೋದು



4 ಜನ ಯುವಕರು ರೈಲ್ವೇ ಸ್ಟೇಷನ್ ಗೆ ಬಂದರು. ಆಗಲೇ ರೈಲು ಹೊರಟಿತ್ತು. ಅದರಲ್ಲಿ ಒಬ್ಬ ಓಡಿ ಹೋಗಿ ರೈಲಿನಲ್ಲಿ ಕೂತ. ಮಿಕ್ಕ ಮೂರು ಜನ ಸ್ಟೇಷನ್ನಲ್ಲೇ ಬೇಜಾರಿನಿಂದ ಕೂತರು. ಅಷ್ಟೊತ್ತಿಗೆ ಬಂದ ರೈಲ್ವೆ ಮಾಸ್ಟರ್ ಹೋಗ್ಲಿ ಬಿಡಿ. ಅಂತೂ ಒಬ್ಬರಾದರೂ ಹೋದರಲ್ಲ ಅಂದ. ಅದಕ್ಕೆ ಈ ಮೂವರು. ಸರ್ ಊರಿಗೆ ಹೋಗಬೇಕಾಗಿದ್ದವರು ನಾವು. ಅವನು ಸೀಟು ಹಿಡಿಯುವುದಕ್ಕೆ ಅಂತಾ ಬಂದಿದ್ದ.



ರೋಗಿಯೊಬ್ಬನಿಗೆ ಗಂಟಲು ಕೆಟ್ಟಿತ್ತು. ವೈದ್ಯರ ಮನೆಗೆ ಹೋಗಿ ಬಾಗಿಲು ಬಡೆದ. ವೈದ್ಯರ ಹೆಂಡ್ತಿ ಬಾಗಿಲು ತೆಗೆದು.

ವೈ.ಹೆಂಡ್ತಿ : ಯಾರ್ ಬೇಕಾಗಿತ್ತು

ರೋಗಿ : (ಮೆಲು ದನಿಯಲ್ಲಿ) ಡಾಕ್ಟ್ರು ಇದಾರಾ

ವೈ.ಹೆಂಡ್ತಿ : ಮೆಲು ದನಿಯಲ್ಲೇ ಅವರು ಇಲ್ಲಾ, ಒಳಗೆ ಬನ್ನಿ.



ದೀಪಾವಳಿ ಹಬ್ಬ ಸಣ್ಣ ಹುಡುಗ ಪಟಾಕಿ ಬೇಕೆಂದು ಹಠ ಮಾಡ್ತಿದ್ದ,

ಅಮ್ಮ : ಈಗಾಗಲೆ ಸಾವಿರ ರೂಪಾಯಿ ಪಟಾಕಿ ಹೊಡೆದಿದ್ದೀಯಾ ಇನ್ನು ಬೇಕಾ ಎಂದು ಬೈಯುತ್ತಾ ಅಡುಗೆ ಮನೆಗೆ ಹೋದಳು

ಹುಡುಗ : ಅಮ್ಮಾ ರೂಂನಲ್ಲಿ ಇನ್ನೊಂದು ಕೆಂಪು ಬಣ್ಣದ್ದು ದೊಡ್ಡ ಪಟಾಕಿ ಇದೆ. ಬೆಂಕಿ ಹಚ್ಲಾ.

ಅಮ್ಮ : ಅಯ್ಯೋ ಗೂಬೆ. ಅದು ಸಿಲಿಂಡರ್ ಕಣೋ



ಗುಂಡ ಬೆಂಗಳೂರಿನಿಂದ ಬಾಂಬೆಗೆ ಹೋಗಬೇಕಾಗಿತ್ತು. ರೈಲು ಫುಲ್ ರಷ್ ಆಗಿತ್ತು. ಸೀಟಿಗಾಗಿ ಏನ್ ಮಾಡ್ಬೇಕು ಅಂತಾ ಯೋಚಿಸ್ತಿದ್ದ. ಹಾವು,ಹಾವು ಅಂತಾ ಜೋರಾಗಿ ಕೂಗಿದ. ಬೋಗಿಯಲ್ಲಿ ಇದ್ದವರೆಲ್ಲಾ ಇಳಿದು ಓಡಿದರು. ಅಬ್ಬಾ ಎಲ್ಲಾ ಸೀಟು ಖಾಲಿ ಆಯ್ತಲ್ಲಾ ಹಾಗೇ ನಿದ್ದೇ ಹೋದ. ಬೆಳಗ್ಗೆ ಎದ್ದಾಗ ಬೋಗಿ ಬೆಂಗಳೂರು ಸ್ಟೇನಲ್ಲೇ ಇತ್ತು. ಯಾಕೆ ಸರ್ ಟ್ರೇನ್ ಬಾಂಬೆಗೆ ಹೋಗಲಿಲ್ವಾ. ಹೋಯ್ತಲ್ಲಾ ಅಂದ ಸ್ಟೇಷನ್ ಮಾಸ್ಟರ್. ಮತ್ತೆ ಈ ಬೋಗಿ ಇಲ್ಲೇ ಇದೆ. ಇದರಲ್ಲಿ ಹಾವು ಇತ್ತು ಅಂತಾ, ಈ ಬೋಗಿಯೊಂದನ್ನು ಬಿಟ್ಟು ಹೋಗಿದ್ದಾರೆ ಅಂದಾಗ, ಗುಂಡನ ಮುಖ ಸಪ್ಪಗೆ ಆಗಿತ್ತು.





ಮೇಷ್ಟ್ರು : ಸ್ಕೂಲಿಗೆ ಬರದೆ ಎಲ್ಲಿಗೋ ಹೋಗ್ತೀಯಾ ಅಂತಾ ಹುಡುಗನೊಬ್ಬನಿಗೆ ಹೊಡಿತಾ ಇದ್ದರು.

ಹುಡುಗನ ಅಪ್ಪ ; ಹಾಕಿ ಸರ್, ಇನ್ನೊಂದು ನಾಲ್ಕು ಹಾಕಿ

ಮೇಷ್ಟ್ರು : ನೋಡೋ ನಿಮ್ಮ ಅಪ್ಪನಿಗೆ ವಿದ್ಯಾಭ್ಯಾಸ ಎಂದರೆ ಎಷ್ಟು ಇಂಟರೆಸ್ಟ್

ಹುಡುಗನ ತಂದೆ : ಹಂಗೇನಿಲ್ಲಾ, ಬೆಳಗ್ಗೆ ಎಮ್ಮೆ ಮೇಯಿಸಲಿಕ್ಕೆ ಹೋಗು ಅಂದ್ರೆ ಇಲ್ಲಿ ಬಂದಿದಾನೆ. ಹಾಕ್ರಿ ಮೇಷ್ಟ್ರೆ.



ಮೂರು ಜನ ಹೆಂಗಸರು ಕಟ್ಟೆ ಮೇಲೆ ಕೂತು ಅವರ ಗಂಡಂದಿರ ಮರೆಗುಳಿ ತನವನ್ನು ಹೇಳುತ್ತಾ ಕೂತಿದ್ದರು.

1 : ನಮ್ಮ ಯಜಮಾನ್ರಿಗೆ ಮರೆವೂ ರೀ. ಬೆಳಗ್ಗೆ ಒಂದು ಡಬರಿ ಉಪ್ಪಿಟು ತಿಂದಿರ್ತಾರೆ. ಸ್ವಲ್ಪ ಹೊತ್ತು ಬಿಟ್ಟು ಬಂದು ಏನೇ ನಂಗೆ ತಿನ್ನಕ್ಕೆ ಏನೂ ಕೊಟ್ಟಿಲ್ಲ. ಇವತ್ತು ಏಕಾದಶಿಯೇನೇ ಅಂತಾರಿ.



2 : ನಮ್ಮ ಯಜಮಾನ್ರೂದೂ ಅದೇ ರೀ, ಆಫೀಸಿಗೆ ಹೋಗಿರ್ತಾರೀ, ಬರ್ತಾ ಛತ್ರಿನೋ ,ಬ್ಯಾಗನೋ ತಂದಿರ್ತಾರ್ರೀ. ಏನ್ರೀ ಇದು ಅಂದ್ರೆ. ನನಗೆ ಮರೆವು ಅಂತ್ಯಲ್ಲಾ ನೋಡು ಅಂತಾರೆ. ನಿಜ ನೋಡಿದರೆ ಅವರು ಆಫಿಸಿಗೆ ಛತ್ರಿ, ಬ್ಯಾಗು ತೊಗಂಡು ಹೋಗೇ ಇರಲ್ಲಾರೀ, ಯಾರದೋ ಹೊಡ್ಕೊಂಡು ಬಂದಿರ್ತಾರ್ರೀ



3 : ನಮ್ಮ ಯಜಮಾನ್ರಗೂ ಮರೆವೂ ರೀ. ರಾತ್ರಿ ಜೊತೆ ಕೂತು, ಊಟ ಮಾಡಿ, ಎಲೆ ಅಡಿಕೆ ಹಾಕ್ಕೊಂಡು, ಮಲಗೋ ತನಕಾ ಚೆನ್ನಾಗೇ ಇರ್ತಾರೆ. ಬೆಳಗ್ಗೆ ಎದ್ದು ಯಾಕೇ ಅಕ್ಕಾ ನನ್ನ ರೂಂನಲ್ಲಿ ಬಂದು ಮಲಿಗಿದಿಯಾ ಅಂತಾರ್ರೀ......

2 comments:

  1. ಜೋಕ್‌ಗಳು ಸೂಪರ್‍ ಸಾರ್‍! :-) ;-)

    ReplyDelete
  2. ಧನ್ಯವಾದಗಳು ಪ್ರಸನ್ನ

    ReplyDelete