Tuesday, October 5, 2010

ಸಹಾಯದ ಮನಸ್ಸಿದ್ದರೆ

ಸ್ನೇಹಿತರೆ ಬಹಳ ದಿನಗಳಿಂದ ನನ್ನ ತಲೆಯಲ್ಲಿ ಹೇಳುವುದಕ್ಕಿಂತ ಮಾಡಿ ತೋರಿಸಬೇಕು ಎನ್ನುವ ತುಡಿತ ಕಾಡುತ್ತಿತ್ತು. ಅದನ್ನು ಹೇಗೆ ಹೊರ ಹಾಕಬೇಕೆಂಬುದು ನನ್ನ ಪ್ರಶ್ನೆ ಹಾಗೆಯೇ ಉಳಿದಿತ್ತು. ಬಡವರಿಗೆ ಸಹಾಯ ಮಾಡಬೇಕು ಎನ್ನುವ ರಾಜಕಾರಣಿಗಳ ಮಾತು ಯಾಕೋ ಹಲವಾರು ಬಾರಿ ಜಿಗುಪ್ಸೆ ಹುಟ್ಟಿಸಿದ್ದು ಇದೆ. ಕೇವಲ ಜಾತಿ ಬಾಂಧವರಿಗೆ ಮಾತ್ರವಲ್ಲದೆ ಕಷ್ಟದಲ್ಲಿ ಇರುವಂತವರಿಗೆ ಸಹಾಯ ಮಾಡಿದರೆ ಏನೋ ಸಾಧಿಸಿದೆವು ಎನ್ನುವ ನೆಮ್ಮದಿ. ಸಹಾಯ ಮಾಡಿದಿವೆಲ್ಲಾ ಎನ್ನುವ ಸಂತೋಷ. ಇದು 100ಕೋಟಿ ರೂಪಾಯಿಗಳು ಕೊಟ್ಟರೂ ಸಿಗುವುದಿಲ್ಲ.
ನನ್ನ ಸ್ವಪ್ರತಿಷ್ಠೆಗಾಗಿ ಹೇಳುತ್ತಿಲ್ಲ. ಕೆಲವರಿಗೆ ಕಚೇರಿಯಲ್ಲಿ ಸಹಾಯ ಮಾಡಿದಾಗ ಅವರು ಹೇಳುವ ಧನ್ಯವಾದ ಸಾಕಷ್ಟು ದಿನಗಳ ಕಾಲ ನಮ್ಮನ್ನು ಪುಷ್ಠಿಯಾಗಿರಿಸುತ್ತದೆ. ಸತ್ತಂತವರ ಮನೆಗೆ ಸಹಾಯ ಮಾಡಿದರೆ ಏನೋ ಉಪಕಾರ ಮಾಡಿದಿವೆಲ್ಲಾ ಎನ್ನುವ ಸಾರ್ಥಕತೆ. ಇದು ಕೇವಲ ನನ್ನ ಭಾವನೆಯಲ್ಲ. ಇದು ಸಹಾಯ ಮಾಡಿದಂತಹ ಪ್ರತಿಯೊಬ್ಬರಿಗೂ ಆಗಿರುತ್ತದೆ ಎಂದು ಭಾವಿಸಿರುತ್ತೇನೆ.
ಸ್ನೇಹಿತರೆ ಕಳೆದ ವರ್ಷ "ಸ್ವರ್ಣ ಗ್ರಾಮೀಣಾಭಿವೃದ್ದಿ ಹಾಗೂ ಮಹಿಳಾ ಸಬಲೀಕರಣ ಟ್ರಸ್ಟ್" ಎನ್ನುವ ಟ್ರಸ್ಟ್ ಒಂದನ್ನು ಕೇವಲ ಬಲ ಹೀನರಿಗಾಗಿ ಕೆಲವೇ ಮಂದಿ ಸೇರಿ ಮಾಡಿದೆವು. ಇದು ಆರಂಭವಾಗಿ ಈಗಾಗಲೆ ವರ್ಷ ಕಳೆದಿದೆ. ಹಲವಾರು ಮಹಿಳೆಯರಿಗೆ ಇದರ ಅಡಿಯಲ್ಲಿ ಹೊಲಿಗೆ ತರಬೇತಿ ನೀಡಿದ್ದೇವೆ. ಯಾವುದೇ ಪ್ರತ್ಯಾಕ್ಷೇಪವಿಲ್ಲದೆ. ಲಕ್ಷಾಂತರ ರೂಗಳನ್ನು ವ್ಯಯಿಸಿದ್ದೇವೆ. ಕಾರಣ ಬಲ ಹೀನರಿಗೆ ಒಂದು ಸಹಾಯವಾಗುತ್ತದಲ್ಲಾ ಎನ್ನುವ ಏಕೈಕ ಕಾರಣಕ್ಕಾಗಿ. ಸತ್ತಂತವರ ಮನೆಯಲ್ಲಿನ ಹಲವರ ಗೋಳು ಹೇಳ ತೀರದಂತಾಗಿರುತ್ತದೆ. ಕಚೇರಿಗೆ ಅಲಿದು ಅಲಿದು ಸಾಕಾಗಿರುತ್ತಾರೆ, ಇಂತವರ ಸಹಾಯಕ್ಕೆಂದೇ ಈ ಟ್ರಸ್ಟ್ ತೆಗೆದಿರುವುದು. ನಿಮಗೆ ಸಹಾಯ ಮಾಡಲು ಇಚ್ಛೆಯಿದ್ದರೆ
IFSC code : KARB 0000704
A/C no : 7042000100045801
ಈ ಮೇಲಿನ ಅಕೌಂಟ್್ಗೆ ನಿಮ್ಮ ಹಣ ಸಂದಾಯ ಮಾಡಬಹುದು. ನಿಮಗೆ ಯಾವುದೇ ರೀತಿಯ ವಿಷಯ ಚರ್ಚಿಸಬೇಕೆಂದರೆ
ಸುರೇಶ್ : 7899542639ಗೆ ಸಂಪರ್ಕಿಸಬಹುದು.

2 comments:

  1. ತುಂಬಾ ಮಹತ್ವದ ಕೆಲಸ ಮಾಡುತ್ತಿದ್ದೀರಿ, ಒಳ್ಳೆಯದಾಗಲಿ. ಸಾಧ್ಯವಾದರೆ ನಾನೂ ಸಹಾಯ ಮಾಡುತ್ತೇನೆ.

    ReplyDelete
  2. ನಿಮ್ಮ ಸಹಾಯದ ಮನೋಭಾವಕ್ಕೆ ಧನ್ಯವಾದಗಳು ಪ್ರಸನ್ನ.

    ReplyDelete